ಕೆನಡಾದಲ್ಲಿ ಭೀಕರ ಅಪಘಾತ-ಭಾರತೀಯ ಐವರು ವಿದ್ಯಾರ್ಥಿ ದುರ್ಮರಣ
ಕೆನಡಾ: ಟೊರಂಟೋ ದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರರದ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಮೃತರನ್ನ ಹರ್ಪ್ರೀತ್ ಸಿಂಗ್,ಕರಣ್ ಪಾಲ್ ಸಿಂಗ್,ಮೋಹಿತ್ ಚೌಹಾಣ್,ಪವನ್ ಕುಮಾರ್,ಜಸ್ಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತರೆಲ್ಲ 21 ರಿಂದ 24 ವಯಸ್ಸಿನವರೇ ಅಂತಲೇ ಹೇಳಲಾಗುತ್ತಿದೆ. ಇದೇ ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ವಿಟರ್ ಮೂಲಕ ವಿದೇಶಾಂಗ ಸಚಿವ ಜೈಶಂಕರ್ ವಿವರಿಸಿದ್ದಾರೆ.