ಬ್ರೇಕಿಂಗ್‌ : ಅಲ್ಲು ಅರ್ಜುನ್‌ಗೆ ಸಾಮಾನ್ಯ ಜಾಮೀನು ಮಂಜೂರು

ಬ್ರೇಕಿಂಗ್‌ : ಅಲ್ಲು ಅರ್ಜುನ್‌ಗೆ ಸಾಮಾನ್ಯ ಜಾಮೀನು ಮಂಜೂರು

ತೆಲುಗಿನ ನಟ ಅಲ್ಲು ಅರ್ಜುನ್‌ಗೆ ತೆಲಂಗಾಣದ ನಾಂಪಲ್ಲಿ ನ್ಯಾಯಾಲಯವು ಸಾಮಾನ್ಯ ಜಾಮೀನು ನೀಡಿದೆ. ಈ ಮೂಲಕ ಅಲ್ಲು ಅರ್ಜುನ್‌ಗೆ ಬಿಗ್ ರಿಲೀಫ್‌ ಸಿಕ್ಕಂತಾಗಿದೆ. 

ಪುಷ್ಪ 2–ದಿ ರೂಲ್‌ ಚಿತ್ರದ ಬಿಡುಗಡೆ ಸಮಯದಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಹೈಕೋರ್ಟ್ ಅಲ್ಲು ಅರ್ಜುನ್ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಅವರು ಸಾಮಾನ್ಯ ಜಾಮೀನು ಕೋರಿ ನಾಂಪಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.